ಸುದ್ದಿ
ಇಂಡೋನೇಷಿಯಾ, ಇರಾನ್ ಚಲನಚಿತ್ರಗಳಿಗೆ ಪ್ರಶಸ್ತಿ
ಹದಿನಾಲ್ಕನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷಿಯನ್ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಇಂಡೋನೇಷಿಯಾದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಇರಾನಿನ ‘ಮದರ್ ಲೆಸ್’ ಚಿತ್ರಗಳು ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದವು.
ಚಿತ್ರೋತ್ಸವದ ಕಡೆಯ ದಿನವೂ ನೂಕುನುಗ್ಗಲು
14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕೊನೆಯ ದಿನವಾದ ಗುರುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಆಗಮಿಸುತ್ತಿದ್ದಾರೆ. ಒರಾಯನ್ ಮಾಲ್ ನಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಚಿತ್ರೋತ್ಸವದಲ್ಲಿ 55 ರಾಷ್ಟ್ರಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ.
‘ಅತೀಂದ್ರಿಯ ಸಿನಿಮಾ: ಅಭಿವ್ಯಕ್ತಿಯ ಹುಡುಕಾಟ’
ಅತೀಂದ್ರಿಯ (ಟ್ರಾನ್ಸೆಂಡೆಂಟಲ್) ಕಥನಗಳ ಸಿನಿಮಾಗಳಲ್ಲಿ ಆಳವಾದ ಅಭಿವ್ಯಕ್ತಿಯ ಹುಡುಕಾಟವಿರುತ್ತದೆ ಮತ್ತು ಅದು ಪ್ರೇಕ್ಷಕನನ್ನು ತಾತ್ವಿಕವಾದ ಚಿಂತನೆಗೆ ಒಡ್ಡುತ್ತದೆ ಎಂದು ಶ್ರೀಲಂಕಾದ ಚಿತ್ರ ನಿರ್ದೇಶಕ ವಿಮುಕ್ತಿ ಜಯಸುಂದರ ಅವರು ಅಭಿಪ್ರಾಯಪಟ್ಟರು.
ಶತಮಾನ ಕಂಡ ಸಾಧಕರ ಮಹತ್ವ: ಮೆಲುಕು
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸದಲ್ಲಿ ಮಾಚ್೯. 27ರ ಸೋಮವಾರ ಮಧ್ಯಾಹ್ನ 3.30ಕ್ಕೆ ಶತಮಾನ ಕಂಡ ಸಾಧಕರ ಸ್ಮರಣೆಯ ಕಾರ್ಯಕ್ರಮ ನಡೆಯಿತು. ಈ ವರ್ಷ ಶತಮಾನೋತ್ಸವನ್ನು ಆಚರಿಸಿ ಕೊಳ್ಳುತ್ತಿರುವ ಎಂ.ವಿ.ಕೃಷ್ಣಸ್ವಾಮಿ, ನರಸಿಂಹ ರಾಜು ಮತ್ತು ಎಸ್.ಕೆ.ಎ. ಚಾರಿಯವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಚಲನಚಿತ್ರಗಳಲ್ಲಿ ಮಹಿಳಾ ನಿರ್ದೇಶಕಿಯರ ಮಿತಿ ಚರ್ಚೆಗೆ
ಯಾವುದೇ ಕ್ಷೇತ್ರದಲ್ಲಿ ಮಹಿಳೆ ಸಾಧಿಸಬೇಕೆಂದರೆ ಅವಳು ಮತ್ತೆಮತ್ತೆ ತಾನು ಅರ್ಹಳು ಎಂಬುದನ್ನು ಸಾಬೀತುಪಡಿಸುತ್ತಲೇ ಇರಬೇಕಾಗುತ್ತದೆ, ಇದಕ್ಕೆ ಸಿನಿಮಾ ಕ್ಷೇತ್ರ ಕೂಡ ಹೊರತಲ್ಲ ಎಂದು ಚಲನಚಿತ್ರ ನಿರ್ದೇಶಕಿ, ರಂಗಭೂಮಿ ಕಲಾವಿದೆ ಚಂಪಾ ಶೆಟ್ಟಿ ಹೇಳಿದರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಕಂಟೆಂಟ್ ಚಿತ್ರಕ್ಕೆ ಹಣ ಎಲ್ಲಿಂದ?
ಸಿನಿಮಾವನ್ನು ಸಬ್ಸಿಡಿ ಆಸೆಗಷ್ಟೇ ಮಾಡುತ್ತಿದ್ದಾರೆ… ಹೌದೇ? ವಿಷಯ(ಕಂಟೆಂಟ್) ಆಧರಿತ ಚಿತ್ರಕ್ಕೆ ಬಜೆಟ್ ಹೊಂದಿಸುವುದು ಹೇಗೆ? ಮಾರುಕಟ್ಟೆಯ ಪರ್ಯಾಯಗಳೇನು?
– ಇಂಥ ಹಲವಾರು ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಲು ಸಜ್ಜಾಗಿದ್ದೇ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾನುವಾರ ನಡೆದ ನಿರ್ದೇಶಕರ ಪತ್ರಿಕಾಗೋಷ್ಠಿ ಹಾಗೂ ಸಂವಾದ. ಅದು ಪತ್ರಿಕಾಗೋಷ್ಠಿ ಅನ್ನುವುದಕ್ಕಿಂತ ಒಂದು ಸಂವಾದವಾಗಿಯೇ ಬದಲಾಯಿತು.
ಪ್ರಾದೇಶಿಕ ಚಿತ್ರಗಳಿಗೆ ಪ್ರೋತ್ಸಾಹ ಅಗತ್ಯ- ನಿರ್ದೇಶಕರ ಅಳಲು
ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಪ್ರೇಕ್ಷಕರಿಂದ ಬೇಡಿಕೆ ಇದ್ದರೂ ಪ್ರದರ್ಶನ ವ್ಯವಸ್ಥೆ ಇಲ್ಲದೆ ಉದಯೋನ್ಮುಖ ನಿರ್ಮಾಪಕ ನಿರ್ದೇಶಕರು ಅಸಹಾಯಕರಾಗಿದ್ದಾರೆಂದು ಚಲನಚಿತ್ರ ನಿರ್ದೇಶಕರು ಅಭಿಪ್ರಾಯಪಟ್ಟರು.
ಚಲನಚಿತ್ರೋತ್ಸವ | ಅಭಿನಯವೂ ಪಠ್ಯ ವಿಷಯವಾಗಲಿ: ನಟಿ ಹೇಮಾ ಪಂಚಮುಖಿ
‘ಶಾಲೆಗಳಲ್ಲಿ ಇತರ ವಿಷಯಗಳನ್ನು ಕಲಿಸಿದಂತೆ ಅಭಿನಯ ಕೂಡ ಪಠ್ಯ ವಿಷಯವಾಗಬೇಕು. ಹಾಗಾದರೆ ಮಕ್ಕಳಿಗೆ ಮುಂದೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಅನುಕೂಲವಾಗುತ್ತದೆ’ಎಂದು ಚಿತ್ರನಟಿ ಹೇಮಾ ಪಂಚಮುಖಿ ಆಶಯ ವ್ಯಕ್ತಪಡಿಸಿದರು.
‘RRR’ and ‘Baahubali’ writer V Vijayendra Prasad on What Keeps Him Ticking
The eminent filmmaker and scriptwriter was in Bengaluru for the inauguration of BIFFEs, and spoke about his masterclass ‘RRR: Behind the Screenplay’